ಸವಣೂರಿನಲ್ಲಿ ಮಕ್ಕಳಿಂದ ಧೀಂಗಿಣ ಕಿಟತಕ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಒಕ್ಟೋಬರ್ 12 , 2013
|
ಒಕ್ಟೋಬರ್ 12 , 2013
|
ಸವಣೂರಿನಲ್ಲಿ ಮಕ್ಕಳಿಂದ ಧೀಂಗಿಣ ಕಿಟತಕ
ಕಡಬ :
ಯಕ್ಷಗಾನ ಎಂದಾಕ್ಷಣ ಕರಾವಳಿಯ ಪ್ರತಿಯೊಬ್ಬರೂ ರೋಮಾಂಚನಗೊಳ್ಳುತಾರೆ. ಚೆಂಡೆಯ ನಾದಕ್ಕೆ ಹೆಜ್ಜೆ ಹಾಕದವರು ವಿರಳ. ಇಂತಹ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳಿಂದ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಈ ನಿಟ್ಟಿನಲ್ಲಿ ಸವಣೂರಿನ ಶ್ರವಣರಂಗ ಸಾಂಸ್ಕೃತಿಕ ಕಲಾ ಕೇಂದ್ರವೂ ಹೆಜ್ಜೆ ಇಟ್ಟಿದೆ. ಮಕ್ಕಳಲ್ಲಿ ಯಕ್ಷಗಾನದ ಬಗ್ಗೆ ಅಭಿರುಚಿ ಮೂಡಿಸುವ ಕಾರ್ಯ ಮಾಡುತ್ತಿದ್ದು ಸವಣೂರು ಮತ್ತು ಆಸುಪಾಸಿನ ಆಸಕ್ತ ಮಕ್ಕಳಿಗೆ ಉಚಿತ ಯಕ್ಷಗಾನ ನಾಟ್ಯ ತರಬೇತಿಯನ್ನು ಆಯೋಜಿಸಿದೆ.
ಸವಣೂರಿನ ಯುವ ಸಭಾಭವನದಲ್ಲಿ ತರಬೇತಿ ಕಾರ್ಯ ನಡೆಯುತ್ತಿದ್ದು ರಜಾವಧಿಯಲ್ಲಿ ಮಕ್ಕಳು ತಮ್ಮ ಆಸಕ್ತಿಯನ್ನು ಹವ್ಯಾಸವಾಗಿಸಲು ವೇದಿಕೆ ಯನ್ನು ಕಲ್ಪಿಸಲಾಗಿದೆ. ಶ್ರವಣ ರಂಗ ಸಾಂಸ್ಕೃತಿಕ ಕಲಾ ಕೇಂದ್ರದ ಸಂಚಾಲಕ ಕಲಾವಿದ ತಾರಾನಾಥ ಸವಣೂರು ಅವರ ನಿರ್ದೇಶನದಲ್ಲಿ ನತ್ಯ ಕಾರ್ಯಾಗಾರ ಪ್ರತಿದಿನ ನಡೆಯುತ್ತಿದೆ. ಒಂದನೇ ತರಗತಿಯಿಂದ ಹೆಸ್ಕೂಲ್ ವರೆಗಿನ ಬಾಲಕ ಬಾಲಕಿಯರು ಇಲ್ಲಿ ಯಕ್ಷಗಾನದ ಹೆಜ್ಜೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಎಲೆಮರೆ ಕಾಯಿಯಂತಿರುವ ಅದೆಷ್ಟೋ ಪ್ರತಿಭೆಗಳಿಗೆ ಸೂಕ್ತ ಅವಕಾಶವನ್ನು ನೀಡಿದಲ್ಲಿ ಶ್ರೇಷ್ಠ ಕಲಾವಿದರಾಗಲು ಸಾಧ್ಯ. ಕಲೆಯನ್ನು ಮನಸ್ಸಿಟ್ಟು ಆರಾಸಿದಾಗ ಅದು ಒಲಿಯುತ್ತದೆ ಎನ್ನುವುದಕ್ಕೆ ಇಲ್ಲಿನ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಸಾಕ್ಷಿಯಾಗಿದೆ.ಆಸಕ್ತಿಯಿರುವ ಎಲ್ಲ ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ಉಚಿತವಾಗಿ ಕಲಿಸಿಕೊಡಲಾಗುತ್ತಿದೆ. ದಸರಾ ರಜೆ ಹೊರತು ಪಡಿಸಿ ಇತರ ರಜಾ ದಿನಗಳಲ್ಲೂ ಮಕ್ಕಳಿಗೆ ನೃತ್ಯಾಭ್ಯಾಸ ಮಾಡಿಸಲಾಗುತ್ತಿದೆ.
ಕೃಪೆ : http://vijaykarnataka.indiatimes.com
|
|
|